Thursday 29 March 2012

ಗಣೇಶ


     ಸುಮಾರು 30 ವರ್ಷಗಳ ಹಿಂದಿನ ಮಾತು. ನಮ್ಮೊಂದಿಗೆ ಆಟವಾಡಿಕೊಂಡಿದ್ದ ತಮ್ಮನ ಸ್ನೇಹಿತ ಗಣೇಶ ಆಗ ತಾನೇ ನಾದಸ್ವರ ನುಡಿಸಲು ಆರಂಭಿಸಿದ್ದ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಪೂಜೆಯ ವೇಳೆಯಲ್ಲಿ ನಾದಸ್ವರ ನುಡಿಸುತ್ತಿದ್ದ ಈತ ಕ್ರಮೇಣ ಮದುವೆ ಮುಂಜಿ ನಾಮಕರಣದಲ್ಲಿ ನುಡಿಸಲಾರಂಭಿಸಿದ. ಸ್ವಲ್ಪ ಸ್ವಲ್ಪಾನೇ ಹೆಸರು ಗಳಿಸಲಾರಂಭಿಸಿದ್ದ. ಜನರು ಈತನನ್ನು ಗುರುತಿಸಲಾರಂಭಿಸಿದ್ದರು. ಆಗ ಅವನಿಗೆ ಸುಮಾರು 18-19 ವರ್ಷ ವಯಸ್ಸಿರಬಹುದು.

     ಅಂದು ನನ್ನ ಮದುವೆಗೆ ಬೆಂಗಳೂರಿನಿಂದ ಭಾವೀ ಗಂಡನ ಸುಮಾರು 20 ಜನ ಸ್ನೇಹಿತರು ಮಂಗಳೂರಿಗೆ ಬಂದಿದ್ದರು. ತಮ್ಮನೊಂದಿಗೆ ಆಟವಾಡಲು ದಿನಾ ನಮ್ಮ ಮನೆಗೆ ಬರುತ್ತಿದ್ದ ಗಣೇಶ ನಮ್ಮ ಮನೆಯವರಲ್ಲಿ ಒಬ್ಬನಾಗಿದ್ದ. ನನ್ನ ಮದುವೆಗೆ ತಾನೇ ನಾದಸ್ವರ ನುಡಿಸುವುದಾಗಿ, ಆದರೆ ಸಂಭಾವನೆ ಮಾತ್ರ ತೆಗೆದುಕೊಳ್ಳುವುದಿಲ್ಲವೆಂದು ಮಾತು ತೆಗೆದುಕೊಂಡಿದ್ದ. ಆ ಸಮಯದಲ್ಲಿ ಶಂಕರಾಭರಣ, ಸನಾದಿ ಅಪ್ಪಣ್ಣ ಸಿನೆಮಾದ ಹಾಡುಗಳು ತುಂಬಾ ಜನಪ್ರಿಯವಾಗಿತ್ತು. ಗಣೇಶ ನುಡಿಸಲಾರಂಭಿಸಿದ. ಮದುವೆಗೆ ಬೆಂಗಳೂರಿನಿಂದ ಬಂದ ಗಂಡನ ಗೆಳೆಯರೆಲ್ಲರೂ ಗಣೇಶನ ಮುಂದೆ ಸೇರಿ ಒಂದಾದ ಮೇಲೆ ಒಂದು ತಮಗಿಷ್ಟವಾದ ಹಾಡನ್ನು ನುಡಿಸಲು ಕೇಳಲಾರಂಭಿಸಿದರು. ಗಣೇಶ ಕೂಡಾ ಸ್ವಲ್ಪವೂ ಬೇಸರವಿಲ್ಲದೆ ಅವರು ಕೇಳಿದ ಹಾಡುಗಳನ್ನು ನುಡಿಸುತ್ತಿದ್ದ.

     ಗಣೇಶ ನನ್ನ ಮಗಳ ಮದುವೆಗೂ ನಾದಸ್ವರ ನುಡಿಸಲು ಒಪ್ಪಿದ್ದ.. ಗಣೇಶ ಇಂದು ತುಂಬಾ ಹೆಸರು ಗಳಿಸಿ ತುಂಬಾ ಎತ್ತರಕ್ಕೆ ಬೆಳೆದಿದ್ದ. ಒಂದು ಕಾರ್ಯಕ್ರಮಕ್ಕೆ 25 ರಿಂದ 30 ಸಾವಿರ ರೂ.ಗಳನ್ನು ಪಡೆಯುತ್ತಿದ್ದ. ವಿದೇಶಗಳಲ್ಲೂ ಹಲವು ಕಾರ್ಯಕ್ರಮಗಳನ್ನು ನೀಡಿದ್ದ. ಮಗಳ ಮದುವೆಗೂ ನಮ್ಮ ಮದುವೆಗೆ ಬಂದಿದ್ದ ನನ್ನ ಗಂಡನ ಸ್ನೇಹಿತರಲ್ಲಿ ಕೆಲವರು ಬಂದಿದ್ದರು. ಇಂದೂ ಅವರು ಗಣೇಶನ ಮುಂದೆ ಸೇರಿ ಅವರಿಗಿಷ್ಟವಾದ ಹಾಡುಗಳನ್ನು ನುಡಿಸಲು ಕೇಳುತ್ತಿದ್ದರು. ಅದೇ ಶಂಕರಾಭರಣಂ ಹಾಡನ್ನು ನುಡಿಸಲು ಕೇಳಿದರು. ಗಣೇಶ ನುಡಿಸಲಾರಂಭಿಸಿದ.



     ಮಗಳ ಮದುವೇಲಿ ಗಣೇಶನಿಗೆ ಸನ್ಮಾನ ಮಾಡಬೇಕೆಂದು ತೀರ್ಮಾನಿಸಿ ಶಾಲು ಹಣ್ಣುಗಳನ್ನು ತಂದು ಮದುವೆ ಮಂಟಪಕ್ಕೆ ಕರೆದು ಸನ್ಮಾನ ಮಾಡಿದೆವು. ಅವನು 2011ರ ನವೆಂಬರ್ ನಲ್ಲಿ ಅತ್ಯುತ್ತಮ ನಾದಸ್ವರ ವಾದಕ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಸಮಾರಂಭ. ಮಾನ್ಯ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪ್ರಧಾನ. ನಾವು ಮಗಳ ಸಮೇತ ಸಮಾರಂಭಕ್ಕೆ ಹೋಗಿದ್ದೆವು. ಪ್ರಶಸ್ತಿಗೆ ಆಯ್ಕೆಯಾದವರನ್ನು ಒಬ್ಬೊಬ್ಬರನ್ನೇ ಸ್ಟೇಜಿಗೆ ಕರೆದು ಕುಳ್ಳಿರಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಗಣೇಶನ ಸರದಿ ಬಂತು. ನಮ್ಮೂರ ಹುಡುಗ, ಪಕ್ಕದ್ಮನೆ ಹುಡುಗ ಗಂಭೀರವಾಗಿ ಸ್ಠೇಜಿಗೆ ಹತ್ತುತ್ತಿದ್ದಂತೆ ಅಭಿಮಾನದಿಂದ ಮೈ ರೋಮಾಂಚನವಾಗುತ್ತಿತ್ತು. ಬಹುಷ: ಅವನು ನಮ್ಮನ್ನು ಅಲ್ಲಿ ನಿರೀಕ್ಷಿಸಿರಲಿಲ್ಲ. ಸ್ಟೇಜಿಗೆ ಹತ್ತಿ ಕೈ ಮುಗಿಯುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದ ನಮ್ಮನ್ನು ಕಂಡವನೇ ನಮ್ಮ ಕಡೆ ಕೈ ಬೀಸಿದ. ಸಂತೋಷ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಮಗೂ ಹಾಗೆಯೇ ಆಗಿತ್ತು. ಯಾರಾದರೂ ನೋಡಬಹುದು ಅನ್ನುವ ಅರಿವೂ ಇಲ್ಲದೆ ಆನಂದಬಾಷ್ಪ ಉದುರುತ್ತಿತ್ತು.

*****

Monday 26 March 2012

ಸೀಮಂತ

ಸೀಮಂತ

ಗರ್ಭಿಣಿಗೆ 7 ಅಥವಾ 9 ತಿಂಗಳಲ್ಲಿ ಸೀಮಂತ ಮಾಡಲಾಗುತ್ತದೆ. ಗಂಡನ ಮನೆಯಲ್ಲಿ ಸೀಮಂತ ಮಾಡಿ ಚೊಚ್ಚಲ ಹೆರಿಗೆಗೆ ತವರು ಮನೆಗೆ ಕಳುಹಿಸುವುದು ಸಂಪ್ರದಾಯ. 7 ತಿಂಗಳಲ್ಲಿ ಸೀಮಂತ ಮಾಡಿದಲ್ಲಿ ಹಿಂಗಾರ ಸಹಿತ 7 ಬಗೆಯ ಹೂವುಗಳನ್ನು ಮುಡಿಸಲಾಗುತ್ತದೆ  ಹಾಗೂ 7 ಬಗೆಯ ತಿಂಡಿಗಳನ್ನು ಬಡಿಸಲಾಗುತ್ತದೆ. 9 ತಿಂಗಳಲ್ಲಿ ಸೀಮಂತ ಮಾಡಿದಲ್ಲಿ 9 ಬಗೆಯ ಹೂವುಗಳನ್ನು ಮುಡಿಸಲಾಗುತ್ತದೆ ಹಾಗೂ 9 ಬಗೆಯ ಸಿಹಿ ತಿಂಡಿಗಳನ್ನು ಗರ್ಭಿಣಿಗೆ ಬಡಿಸಲಾಗುತ್ತದೆ.
ಗಂಡನ ಮನೆಯವರು ಗರ್ಭಿಣಿಗೆ ಹಸಿರು ಸೀರೆಯನ್ನುಡಿಸಿ ಹೂ ಮುಡಿಸುವುದು





ಬೈತಲೆಗೆ ಸಿಂಧೂರ (ಗೋಪಿ ಚಂದನ) ಹಚ್ಚುವುದು
ಅತ್ತೆ ಆಭರಣ ತೊಡಿಸುವುದು
ತಾಯಿ ಆಭರಣ ತೊಡಿಸುವುದು

ತಾಯಿ ಮಡಿಲು ತುಂಬುವುದು
ಮಡಿಲ ಮೇಲೆ ಒಂದು ಟವೆಲ್ ನ್ನು ಹಾಕಿ ಮೊದಲು 2 ತೆಂಗಿನಕಾಯಿ ತುಂಬಬೇಕು ನಂತೆರ ವೀಳ್ಯದೆಲೆ, ಅಡಿಕೆ ಸೇರಿಸಿ ಅಕ್ಕಿಯನ್ನು ಮಡಿಲಿಗೆ ತುಂಬಬೇಕು. ಇದೇ ರೀತಿ 5 ಸಲ ಮಾಡಿ ಸೇಸೆ ಹಾಕಬೇಕು.
ಗಂಡನ ಮನೆಯವರು ಮಡಿಲು ತುಂಬುವುದು


ಮುತ್ತೈದೆಯರು ಮಡಿಲು ತುಂಬುವುದು

ಗಂಡನ ಮನೆಯವರಿಂದ ಆರತಿ

ತಾಯಿ ಮನೆಯವರಿಂದ ಆರತಿ

ಮೊದಲಿಗೆ ತವರು ಮನೆಯಿಂದ ತಂದ ಬುತ್ತಿ ಅನ್ನ, ಕೊಟ್ಟೆ, ಕಾಯಿಹಾಲು ಬಡಿಸಬೇಕು ನಂತರ 7 ಬಗೆಯ ಅಥವಾ 9 ಬಗೆಯ ತಿಂಡಿಗಳನ್ನು ಬಡಿಸಬೇಕು.
ಗರ್ಭಿಣಿಯ ಜೊತೆಯಲ್ಲಿ ನಾಲ್ಕು ಜನ ಮಕ್ಕಳನ್ನು ಕೂರಿಸುತ್ತಾರೆ. ಅವರಿಗೂ ಒಂದೊಂದು ಬಡಿಸಬೇಕು.


ಅತ್ತೆ ಮನೆಯವರು ಬಡಿಸುವುದು



Sunday 18 March 2012

ಬೀಗರೌತಣ


ಬೀಗರೌತಣ












































ಬಸಿರು


ಮಗಳನ್ನು ಎಳಕ್ಕೊಂಡು ಬಂದವಳೇ, ನೋಡಿ ಅಕ್ಕ ಎಂತ ಕೆಲಸ ಮಾಡ್ಕೊಂಡವ್ಳೆ. ನಮ್ ಮರ್ಯಾದೆ ಎಲ್ಲ ಕಳೆದ್ಲು. ನಾನೀಗ ಏನು ಮಾಡ್ಲಿ. ಏನು ಮಾಡ್ಬೇಕು ಅಂತಾನೇ ಗೊತ್ತಾಗ್ತಿಲ್ಲ. ಈಗ ನೀವೇ ನನ್ಗೆ ಸಹಾಯ ಮಾಡ್ಬೇಕು  ಅಂತ ಮನೆ ಕೆಲಸದವಳು ಅಳುತ್ತಾ ಕಾಲು ಹಿಡ್ಕೊಂಡು ಬಿಟ್ಳು. ನಾನು ಅವಳನ್ನು ಕೈಹಿಡಿದೆತ್ತಿ ಮೊದಲು ಕಣ್ಣೊರಸಿಕೊ, ನಿಧಾನವಾಗಿ ಏನಾಯ್ತು ಅಂತ ಬಿಡಿಸಿ ಹೇಳು ಅಂದೆ. ಅವಳು ಮಗಳ ತಲೆಗೊಂದು ಮೊಟಕಿ, ಹೇಳಲಾರಂಭಿಸಿದಳು.

ನಮ್ ಯಜಮಾನಪ್ಪನ ಅಕ್ಕನ್ ಮಗ ಯಾವ್ದೋ ಕಂಪ್ನೀಲಿ ಕೆಲ್ಸ ಸಿಕ್ತು ಅಂತ ಬೆಂಗ್ಳೂರಿಗೆ ಬಂದವ್ನೆ. ನಮ್ ಯಜಮಾನಪ್ಪ ಅಲ್ಲಿ ಇಲ್ಲಿ ಯಾಕೆ ಇರ್ತೀಯಾ ನಮ್ಮನೇಲೆ ಇರು ಅಂತ ಹೇಳ್ದ. ಹೆಣ್ಮಕ್ಳು ಇರೋ ಮನೆ ಅಂತ ನನ್ಗೆ ಅವ್ನನ್ನ ಮನೇಲಿ ಇಟ್ಕೋಳ್ಳೋಕೆ ಇಷ್ಟ ಇರ್ಲಿಲ್ಲ. ಅವ್ನ ಬುದ್ಧೀನೂ ಸರಿ ಇರ್ಲಿಲ್ಲ. ಇವ್ಳು ಗಾರ್ಮೆಂಟ್ ಕಂಪ್ನೀಗೆ ಕೆಲ್ಸಕ್ಕೆ ಹೋಗುತ್ತಿದ್ದಳು. ನಾನು ನಿಮ್ಮನೆ ಕೆಲ್ಸ ಮುಗಿಸ್ಕೊಂಡು ಛತ್ರದ ಕೆಲಸಕ್ಕೆ ಹೋಗುತ್ತಿದ್ದೆ. ಹಗಲಿಡೀ ಮನೇಲಿ ಯಾರೂ  ಇರ್ತಿರ್ಲಿಲ್ಲ.  ಒಂದಿನ ಇವ್ನು ಬಂದವ್ನೇ ನಾನಿವಳನ್ನ ಮದ್ವೆ ಆಗ್ತೀನಿ ಅಂದ. ನಾನು ಆಗೋದಿಲ್ಲಪ್ಪಾ ನಾವು ಅವ್ಳಿಗೆ ಬೇರೆ ಗಂಡು ನೋಡಿದ್ದೇವೆ ಅಂದೆ. ಅವ್ನು ಅದನ್ನೇ ಮನಸ್ಸಲ್ಲಿಟ್ಟು ಇಂತಾ ಕೆಲ್ಸ ಮಾಡವ್ನೆ. ಈಗ ಹೇಗೆ ಕೊಡಲ್ಲ ಅಂತ ಹೇಳ್ತಾರೆ ನಾನೂ ನೋಡ್ತೀನಿ ಅಂತ ಹೇಳ್ತವ್ನೆ. ಹಂಗೂ ತೆಗ್ಸಿ ಬಿಡೋಣ ಅಂತ ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದೆ. ಡಾಕುಟ್ರು ಆಗ್ಲೇ 5 ತಿಂಗ್ಳು ಆಗೈತೆ. ಈಗ ಏನಾದ್ರೂ ತೆಗಿಸಿದ್ರೆ ಜೀವಕ್ಕೆ ಅಪಾಯ. ತುಂಬಾ ಖರ್ಚು ಆಗ್ತೈತೆ ಅಂತ ಹೇಳುದ್ರು. ನೀವೇ ಹೇಳಿ ಅಕ್ಕ ನಾನೀಗ ಏನು ಮಾಡ್ಲಿ.

ನಿನ್ನ ಮಗಳ ಈಗಿನ ಪರಿಸ್ಥಿತಿ ನೋಡಿದ್ರೆ ಅವಳನ್ನು ಬೇರೆ ಯಾರೂ ಮದುವೆ ಆಗೋದು ಸಾಧ್ಯ ಇಲ್ಲ. ತೆಗ್ಸೋ ಆಲೋಚನೆ ಬಿಟ್ಟು ಬಿಡು. ಆ ಹುಡುಗನನ್ನು ಕರ್ಕೊಂಡು ಬಾ ನಾನು ಅವನಲ್ಲಿ ಮಾತ್ನಾಡ್ತೀನಿ ಅಂತ ಹೇಳಿದೆ. ಅದರಂತೆ ಅವನನ್ನ ಕರ್ಕೊಂಡು ಬಂದಳು. ಅವನು ಕೆಲವು ಬೇಡಿಕೆಗಳನ್ನಿಟ್ಟ. ಸರಿ ನಾನು ಅದನ್ನೆಲ್ಲ ನೋಡ್ಕೋತೀನಿ ಅಂದೆ. ಮದುವೆಗೆ ದಿನ ಗೊತ್ತಾಯಿತು. ಮದುವೇನೂ ಆಯಿತು. ಅವರಿಗೆ ಬೇರೆ ಮನೆ ಮಾಡಿ ಕೊಡಲಾಯಿತು. ಹೊಸ ಮನೆಯಲ್ಲಿ ಹೊಸ ಸಂಸಾರ ಶುರು ಮಾಡಿದರು.

ಚಾಪೆ ಹಾಸಿಕೊಂಡು ಮಲಗಿದ್ದ ಅವಳು ಸೂರು ನೋಡುತ್ತಾ ಹೊಟ್ಟೆಯ ಮೇಲೆ ಮೆಲ್ಲಗೆ ಕೈಯಾಡಿಸುತ್ತಾ ಯೋಚಿಸುತ್ತಿದ್ದಳು. ಆಗಾಗ್ಗೆ ಗಾರ್ಮೆಂಟ್ ಕಂಪೆನಿಗೆ ಬರುತ್ತಿದ್ದ ಕಂಪೆನಿಯ ಯಜಮಾನನ ಮಗ ಇವಳ ಸೌಂದರ್ಯ ಕಂಡು ಆಸಕ್ತನಾಗಿದ್ದ. ಅವಳು ಅದನ್ನೇ ಪ್ರೀತಿ ಅಂತ ತಿಳ್ಕೊಂಡು ಅವನ ಜೊತೆ ಸಲುಗೆಯಿಂದಿದ್ದಳು. ಸಿನೆಮಾದಲ್ಲಿ ನಡೆಯುವಂತೆ ತನ್ನ ಜೀವನದಲ್ಲೂ ಪವಾಡ ನಡೆದು ಕಂಪೆನಿಯ ಒಡತಿ ಆಗಬಹುದು ಎಂದು ಕನಸು ಕಂಡ ಅವಳು ಅವನು ಕೇಳಿದ್ದನ್ನೆಲ್ಲ ಕೊಟ್ಟಳು. ಅವಳು ಬಸುರಿ ಎಂದು ತಿಳಿಯುತ್ತಲೇ ಅವನು ಕಂಪೆನಿಗೆ ಬರೋದನ್ನೇ ಬಿಟ್ಟುಬಿಟ್ಟ. ಏನೂ ಮಾಡಲು ತೋಚದೆ ತೊಳಲಾಡುತ್ತಿದ್ದಾಗ ತಾನು ಮದುವೆಯಾಗುವುದಾಗಿ ಮುಗ್ಧ ಅತ್ತೆ ಮಗ ದಾರಿ ತೋರಿದ್ದ.  
*****

Saturday 17 March 2012

ಮಳೆ ನಿಂತು ಹೋದ ಮೇಲೆ


ಅವರು ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುತ್ತಿದ್ದರು. ಪ್ರೀತಿ ಹೆಚ್ಚಾಗಿ ಹುಚ್ಚರಂತೆ ಕಿತ್ತಾಡುತ್ತಿದ್ದರು. ಅಂದು ಇದ್ದಕ್ಕಿದ್ದ ಹಾಗೆ ಸಣ್ಣ ವಿಷಯಕ್ಕೆ ಪ್ರಾರಂಭವಾದ ಜಗಳ  ಅತಿರೇಕಕ್ಕೆ ಹೋಗಲಾರಂಭಿಸಿತು. ಎಲ್ಲಾ ಭಾಷೆಗಳೂ ಬಂದು ಹೋದವು. ಕೊನೆಗೆ ಇನ್ನು ಇಲ್ಲಿ ಇರೋದ್ರಲ್ಲಿ ಅರ್ಥವಿಲ್ಲ. ಅಂದ್ಕೊಂಡವಳೇ ಅವಳು ಕೈಗೆ ಸಿಕ್ಕ ಬಟ್ಟೆಬರೆಗಳನ್ನು ತುಂಬಿಕೊಂಡು ಹೊರಟುಬಿಟ್ಟಳು.  

ಅವಳು: ಪ್ರಪಂಚದಲ್ಲಿ ಇವ್ರು ಒಬ್ರೇನಾ ಕೆಲ್ಸಕ್ಕೆ ಹೋಗೋದು. ಮನೇಲಿ ಬಸಿರು ಹುಡುಗಿ ಒಬ್ಬಳೇ ಇರುತ್ತಾಳೆ ಅನ್ನೋ ಜ್ಞಾನ ಬೇಡ್ವಾ. ಫೋನ್ ಮಾಡಿದ್ರೆ ಕಟ್ ಮಾಡ್ತಾರೆ. ಅಷ್ಟೂ ಕನ್ಸರ್ನ್ ಇಲ್ಲದ ಮೇಲೆ ಇವರಿಗೆ ಮದ್ವೆ ಯಾಕೆ ಬೇಕಾಗಿತ್ತು ಮನೆ ಸಂಸಾರ ಎಲ್ಲ ಯಾಕೆ ಬೇಕು. ಮದ್ವೆ ಆದ ಹೊಸದರಲ್ಲಿ ಏನು ಚಿನ್ನ ರನ್ನ ಅಂತ ಮುದ್ದಾಡಿದ್ದೇ ಮುದ್ದಾಡಿದ್ದು. ಇದು ಮೊದಲನೇ ಸಲ ಅಲ್ಲ. ರಿಪೀಟ್ ಆಗುತ್ತಲೇ ಇದೆ. ಎಷ್ಟೂಂತ ಸಹಿಸೋದು. ನಿನ್ನೆಯಂತೂ ಯಾವುದೋ ಪಾರ್ಟಿ ಇತ್ತೂಂತ ಹನ್ನೊಂದು ಗಂಟೆ ರಾತ್ರಿ ಬಂದಿದ್ದಾರೆ. ಮೊಬೈಲ್ಗೆ ಕಾಲ್ ಮಾಡಿದ್ರೆ ಸ್ವಿಚ್ ಆಫ್. ಯಾಕೆ ಲೇಟ್ ಅಂತ ಕೇಳಿದ್ದು ತಪ್ಪಾ? ಅದ್ನೇ ದೊಡ್ಡದು ಮಾಡಿ ಹೇಗೆ ಕೂಗಾಡಿದ್ರು. ನನ್ನಿಷ್ಟ ಕಣೆ ಇದು ನನ್ಮನೆ. ಎಷ್ಟೊತ್ತಿಗಾದ್ರೂ ಬರ್ತೇನೆ ಎಷ್ಟೊತ್ತಿಗಾದ್ರೂ ಹೋಗ್ತೇನೆ. ಪಾರ್ಟೀಲೀ ಒಂದು ಪೆಗ್ ಹಾಕಿದ್ರು ಅನ್ಸುತ್ತೆ.  ಇಲ್ಲಾಂದ್ರೆ ಈ ತರಹ ಮಾತಾಡ್ತಿರಲಿಲ್ಲ. ಹೆಂಡತಿಯಾಗಿ ನನ್ಗೆ ಅಷ್ಟೂ ಸ್ವಾತಂತ್ರ್ಯ ಇಲ್ವಾ. ಮಾಡ್ತೀನಿ ಸರಿಯಾಗಿ. ಒಬ್ಬರೇ ಇದ್ದು ಅನುಭವಿಸಲಿ ಗೊತ್ತಾಗತ್ತೆ. ಅವರೇ ಬಂದು ಗೋಗರೆದ್ರೂ ಹೋಗ್ಬಾರದು. 

ಅವನು: ಏನು ಕಿರಿ ಕಿರಿ ಮಾಡ್ತಾಳೆ. ಮೀಟಿಂಗ್ ಇದೆ ಊಟಾನೂ ಅಲ್ಲೇ ಇದೆ. ನನ್ನನ್ನು ಕಾಯ್ಬೇಡ ಅಂತ ಬೆಳಿಗ್ಗೆ ಹೋಗುವಾಗಲೇ ಹೇಳಿ ಹೋಗಿದ್ದೆ. ಬಾಸ್ ಎಲ್ಲ ಜೊತೇಲಿರುವಾಗ ಬೇಡಾ ಅನ್ನೋದು ಚೆನ್ನಾಗಿರಲ್ಲ ಅಂತ ಒಂದು ಪೆಗ್ ತಗೊಂಡ್ನಪ್ಪ. ಅದೇ ದೊಡ್ಡ ತಪ್ಪಾ. ಅವ್ಳಿಗೆ ಇಷ್ಟ ಇಲ್ಲಾ ಅಂತ ಗೊತ್ತು. ಆದರೆ ಏನು ಮಾಡ್ಲಿ ಎಲ್ರೂ ಹೆಂಡ್ತಿ ಗುಲಾಮ ಅಂತ ರೇಗಿಸಲ್ವಾ ಯಾರೂ ಮಾಡ್ದೇ ಇರೋ ತಪ್ಪು ನಾನು ಮಾಡಿದ್ನಾ. ಎಷ್ಟು ಕನ್ವಿನ್ಸ್ ಮಾಡಿದ್ರೂ ಒಪ್ತಾ ಇಲ್ಲ. ಮೂರು ಹೊತ್ತೂ ಇವ್ಳ ಮುಂದೇನೇ ಕೂತ್ಕೊಂಡು ಇರೋಕೆ ಆಗುತ್ತಾ ಮದ್ವೆ ಆದ ಮಾತ್ರಕ್ಕೆ ಫ್ರೆಂಡ್ಸ್ ಗಳನೆಲ್ಲ ಮರೆಯೋಕಾಗತ್ತಾ. ಅವ್ರೂ ಬೇಕು ತಾನೆ. ಗಂಡಸರು ಅಂದ್ಮೇಲೆ ಸಾವಿರ ಕೆಲ್ಸ ಇರತ್ತೆ. ಮಾತೆತ್ತಿದ್ರೆ ಗಂಟುಮೂಟೆ ಕಟ್ಕೊಂಡು ಹೊರಡ್ತಾಳೆ. ಹೋಗ್ಲಿ  ನನ್ನನ್ನು ಬಿಟ್ಟು ಎಷ್ಟು ದಿನ ಇರ್ತಾಳೋ ನಾನೂ ನೋಡ್ತೀನಿ.  

ಇಬ್ಬರೂ ಒಬ್ಬರಿಗೊಬ್ಬರು ಇನ್ನು ಯಾವತ್ತೂ ದೂರವಾಗದಂತೆ ಬೆಸೆದುಕೊಂಡಿದ್ದರು. ಎರಡು ದಿನಗಳ ವಿರಹದ ನಂತರದ ಬೆಸುಗೆ.  ತಬ್ಬಿಕೊಂಡಿದ್ದಂತಯೇ ಅವಳ ತಲೆಗೆ ಮೆಲ್ಲಗೆ ಮೊಟಕಿ ಬಿಟ್ಟು ಹೋಗ್ತೀಯಾ ನನ್ನ ಎಷ್ಟು ಧೈರ್ಯ ನಿಂಗೆ ಇನ್ನೊಂದ್ಸಲ ಹೀಗೆ ಮಾಡಿದ್ರೆ ನೋಡು ಏನು ಮಾಡ್ತೀನೀಂತ ನೀನು ವಾಪಸ್ಸು ಬರೋದ್ರೊಳಗೆ.. ಮುಂದೆ ಏನೂ ಹೇಳದಂತೆ ಅವಳು ಅವನ ಬಾಯಿಯನ್ನು ಮುಚ್ಚಿದಳು. ನೀವು ಮಾತ್ರ ಇನ್ನೇನು. ನಾನು ಹೋಗ್ತಾ ಇರ್ಬೇಕಾದ್ರೆ ತಡೆಯೋದಲ್ವ. ಹೋದ್ರೆ ಹೋಗ್ಲಿ ಅಂತ ಸುಮ್ನೆ ನೋಡ್ತಾ ಇದ್ರಿ. ಕೋಪ ಬರಲ್ವಾ. ತಬ್ಬಿಕೊಂಡಿದ್ದಂತೆಯೇ ಟಿವಿ ಆನ್ ಮಾಡಿದಳು. ಹಾಡು ಬರುತ್ತಿತ್ತು ಒಲವಿನ ಪೂಜೆಗೆ ಒಲವೇ ಮಂದಾರ ಒಲವೆ ಬದುಕಿನ ಬಂಗಾರ ಒಲವಿನ ನೆನಪೆ ಹೃದಯಕೆ ಮಧುರ….. ವಾವ್ ಎಂತಹ ಸುಂದರ ಸಾಲುಗಳು  ಇಬ್ಬರೂ ಮುಸಿ ಮುಸಿ ನಕ್ಕರು. ಬೆಸುಗೆ ಇನ್ನೂ ಬಿಗಿಯಾಗತೊಡಗಿತು.
*****

ಮದುವೆ



ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನ:
ಕಂತೇ ಬಧ್ನಾಮಿ ಸುಭಗೆ ತ್ವಂಜೀವ ಶರದ ಶತಂ::
ವರನಿಗೆ ಹಾಲ್ನೀರು ನಿವಾಳಿಸುವುದು

ದಿಬ್ಬಣ ಎದುರುಗೊಳ್ಳುವುದು

ವರನಿಗೆ ಮೆಟ್ಟಕ್ಕಿ ಮೇಲೆ ನಿಲ್ಲಿಸಿ ಪಾದಸ್ನಾನ

ವರನಿಗೆ ಹಾಲು, ಬಾಳೆಹಣ್ಣು ನೀಡಿ ಸತ್ಕರಿಸುವುದು
ವೀಳ್ಯ ಬದಲಾಯಿಸುವುದು

ವಧುವಿಗೆ ಮೇಲ್ನೀರು ಸ್ನಾನ

ವಧುವಿಗೆ ಅಂಕೋಲ್ ಧಾರೆ

ಬಾಗಿಲು ಮುಹೂರ್ತ


ವರನಿಗೆ ಮೇಲ್ನೀರು ಸ್ನಾನ


ವರನಿಗೆ ಅಂಕೋಲ್ ಧಾರೆ



ಧಾರೆ ಸೀರೆ, ತಳಿಗೆ ಸೀರೆ, ಹೂಗಳೊಂದಿಗೆ ಬರುವುದು
ಸ್ವಾಗತ


ನಾದಸ್ವರ

ವರನ ತಾಯಿ ಧಾರೆಸೀರೆ, ಕುಪ್ಪಸ ನೀಡುವುದು


ವರನನ್ನು ಮಂಟಪಕ್ಕೆ ಕರೆದುಕೊಂಡು ಬರುವುದು

ವರಪೂಜೆ
ವಧುವನ್ನು ಮಂಟಪಕ್ಕೆ ಕರೆದುಕೊಂಡು ಬರುವುದು

ಅಂತರಪಟ
ರಂಜೆ ಹೂವಿನ ಮಾಲೆ ಹಾಕುವುದು


ಮಾಲಧಾರಣೆ


ಧಾರೆ
ಕನ್ಯಾದಾನ

ಮಂಗಳಸೂತ್ರ ಧಾರಣೆ
ಕಾಲುಂಗುರ ಹಾಕುವುದು


ವಧುವಿನಿಂದ ಕಂಕಣ

ವರನಿಂದ ಕಂಕಣ

ಹೋಮದ ಪ್ರಸಾದ ಇಡುವುದು

ವಧುವಿನ ತಮ್ಮ ಹೋಮಕ್ಕೆ ಹೊದ್ಲು(ಅರಳು) ಎರೆಯುವುದು

ಲಾಜ ಹೋಮ
ಸಪ್ತಪದಿ


ಆರತಿ
ಕಂದನನ್ನು ಆಡಿಸುವುದು


ವಧುನಿಗೆ ವರನ ಕಡೆಯವರು ಸೆರಗು ಹಾಕಿ ಸೀರೆ ಉಡಿಸಿ ಕುಂಕುಮ ಹಚ್ಚಿ ಅಲಂಕಾರ ಮಾಡುವುದು

ಹೆಂಗಳೆಯರು ಸುತ್ತುವರಿದು ಬಚ್ಚಿಟ್ಟಿರುವ ವಧುವನ್ನು ವರ ಹುಡುಕುತ್ತಿರುವುದು
ಉಂಗುರದ ಆಟ